Tuesday, December 24, 2013

Re-declaration Of Meaning Of Secularism

         Re-declaration Of Meaning Of Secularism                  By Rashtreeya SwayamSevaka Sangh (RSS-Fb profile)

Wah , It was a feast to witness the real meaning of secularism in this country. The Organisation which was being blamed for its 'so called' communalism and fundamentalism has shown it's real image by re-declaring the definition of Secularism.
A Christian priest inaugurating RSS Camp-Kerla 

A Christian priest was invited to inaugurate a camp held by RSS-kerla. The camp is of 7 days in which the participants shall be trained with both physical and intellectual aspects.
              The fascinating thing was RSS people worship Bharathmatha as a goddess. But according to christianity to christianity there is no goddess called Bharathmatha. But the priest is respecting the beliefs of Hindus. on the other hand RSS had invited and respected the people whose beliefs say 'bharathmatha is not a goddess".
        Don't you think this is the real meaning of secularism ?

           I think this is a big blow to all those who were shouting at RSS. And For those who were spreading wrong conceptions about RSS. Finally RSS has proved once again that it is the one of the last hopes for a country like Bharatha(that is India). 




Sunday, September 29, 2013

ಹುತಾತ್ಮನಿಗೊಂದು ಗೌರವಯುತ ನಮನ

                   ದಿನಾಂಕ 28-09-2013ರ ಮದ್ಯಾನ್ಹ 12:30ರ ಹೊತ್ತಿಗೆ , ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದ ಹುತಾತ್ಮ ಭಗತ್ ಸಿಂಘರ ಜನ್ಮ ದಿನದ ಆಚರಣೆ ಹಾಗೂ ದೇಶಕ್ಕಾಗಿ ಯೋಚನೆ ಮಾಡುವಂತಹ ಅರ್ಥಪೂರ್ಣ ಕಾರ್ಯಕ್ರಮವೊಂದಕ್ಕೆ ಬೆಂಗಳೂರು ನಗರದ ಆರ್. ಎನ್. ಎಸ್. ಐ. ಟಿ ಕಾಲೇಜಿನ ಕಂಪ್ಯೂಟರ್ ವಿಭಾಗ ಸಾಕ್ಷಿಯಾಯಿತು.

HOD. of cse prof.G.T.Raju and Prof.Bhagwath Singh
       ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ತರಾದ G.Tರಾಜುರವರು ಹಾಗೂ ಭಗ್ವತ್ ಸಿಂಘ್ರವರು ದೀಪ ಬೆಳಗುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮ ವಿಧ್ಯಾರ್ಥಿಗಳಲ್ಲಿ ಒಬ್ಬರಾದ ವಸಿಷ್ಟ ಶಾಸ್ತ್ರಿಯವರ ಪ್ರಾಸ್ತಾವಿಕ ನುಡಿಯ ನಂತರ ಒಂದು ನಿಮಿಷದ "ದೇಶಕ್ಕೋಸ್ಕರ ಚಿಂತನೆ" ಎಂಬ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಮುಕ್ತಾಯಯಿತು.
Vasishta shastry(student) sharing his views
                ಮುಖ್ಯವಕ್ತಾರ ವಸಿಷ್ಟ ಶಾಸ್ತ್ರಿ ಮಾತನಾಡುತ್ತಾ,"ಈ ದೇಶಕ್ಕಾಗಿ ಅಸಂಖ್ಯ ವೀರರು ಪ್ರಾಣಾರ್ಪಣೆ ಮಾಡಿದ್ದಾರೆ ಹಾಗೂ ಮನೆ ,ಮಠ, ಆಸ್ತಿ ಕಳೆದುಕೊಂಡಿದ್ದಾರೆ . ಆದರೆ ನಾವು ಇಂದು ಕೇವಲ ಒಬ್ಬರನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಿದ್ದೇವೆ. ಇದು ತಪ್ಪು. ನಮ್ಮ ದೇಶ ಈ ಹಿಂದೆ ಜಗದ್ಗುರು ಸ್ಥಾನದಲ್ಲಿದಂತಹ ದೇಶ. ಆದರೆ ನಮ್ಮದೇ ಕೆಲವು ತಪ್ಪುಗಳಿಂದ ದಯನೀಯ ಸ್ಥಿತಿ ತಲುಪಿದ್ದೆವು. ಆದರೆ ತಾಯಿ ಭಾರತಿ ಪುನಹ ತಲೆ ಎತ್ತಿ ನಿಂತಿದ್ದಾಳೆ .ಈಬಾರಿ ನಮಗೆಲ್ಲ ಕೆಲಸ ಮಾಡುವ ಸದವಕಾಶ ದೊರಕಿದೆ. ನಮ್ಮ ದೇಶದಲ್ಲಿ ಭಗತ್ರಂತೆ ಅಸಂಖ್ಯಾತ ವೀರರಿದ್ದಾರೆ , ಅವರೆಲ್ಲರ ಹುಟ್ಟುಹಬ್ಬ ಆಚರಿಸಲು ಕಷ್ಟ ಸಾಧ್ಯ. ಆದರೆ ಪ್ರತಿ ಬಾರಿ ನಮ್ಮ ದೇಶಕ್ಕಾಗಿ ನಾನೇನು ಮಾಡಬಲ್ಲೆ ಎಂದು ಯೋಚಿಸಿದರೆ ಅದೇ ಅರ್ಥ ಪೂರ್ಣ ಕಾರ್ಯಕ್ರಮ ವಾಗುತ್ತದೆ" ಎಂದು ಹೇಳಿದನು
              ಕಾರ್ಯಕ್ರಮದ ನಂತರ ಪ್ರಾಧ್ಯಾಪಕರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.



Sunday, July 14, 2013

ಅವಶ್ಯಕತೆ ಅಲ್ಲ ಅನಿವಾರ್ಯತೆ !!..

                   ದಿ. 14-7-13ರಂದು ಬೆಂಗಳೂರಿನ ಜಯನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ನಡೆದ "ನಮೋ ಬ್ರಿಗೇಡ್"ನ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ವಕ್ತಾರ ತೇಜಸ್ವಿ ಸೂರ್ಯರವರು, "ಸ್ವಾತಂತ್ರ್ಯಾನಂತರ ಮೊದಲಬಾರಿಗೆ ನಂಬಬಲ್ಲಂತ ಒಬ್ಬ ಸಮರ್ಥ ವ್ಯಕ್ತಿ ನಮ್ಮೆದುರಿಗಿದ್ದಾರೆ .ಇವರು ಹುಟ್ಟುವಾಗಲೇ ಚಿನ್ನದ ಚಮಚವನ್ನು ಇಟ್ಟುಕೊಂಡುಬಂದವಾರಲ್ಲ,ಬದಲಿಗೆ, ಹೆಜ್ಜೆ ಹೆಜ್ಜೆಗೂ ಅಗ್ನಿ ಪರೀಕ್ಷೆಗಳನ್ನು ಎದುರಿಸಿ ಎಲ್ಲದರಲ್ಲೂ ಡಿಸ್ಟಿಂಕ್ಶನ್ನಲ್ಲಿ ಪಾಸ್ ಆಗಿ ಬಂದವರು. ಅದಕ್ಕಾಗಿಯೇ ಭಾರತದ ಯುವಕರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ನಮೋ ಎನ್ನುವುದು ಒಂದು ವ್ಯಕ್ತಿ ಅಲ್ಲ ಅದೊಂದು ಸಿದ್ದಾಂತ. ದೇಶಕ್ಕಾಗಿ ಪ್ರಾಣ ಕೊಡುವ ಅದೃಷ್ಟ ನಮಗಿಲ್ಲ , ಆದರೆ ದೇಶಕ್ಕಾಗಿ ಕೆಲಸ ಮಾಡುವ ಅವಕಾಶ ದೊರಕಿದೆ . ಬನ್ನಿ ಈ ಸದವಕಾಶ ಉಪಯೋಗಿಸಿಕೊಂಡು ಈ ಸಿದ್ದಾಂತವನ್ನು ಮನೆ-ಮನೆಗೆ , ಮನ-ಮನಕ್ಕೆ  ಮುಟ್ಟಿಸೋಣ" ಎಂಬ ಕರೆ ನೀಡಿದರು.

           ಉತ್ತರಾಖಂಡ ಪ್ರವಾಹದಲ್ಲಿ ಮಡಿದವರಿಗೆ ಮೌನಚರಣೆಯ ಮೂಲಕ  ಶ್ರದ್ದಾಂಜಲಿ  ಅರ್ಪಿಸುವುದೊಂದರಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅತಿಥಿಗಳಾದ ತೇಜಸ್ವಿ ಸೂರ್ಯ, ಪದ್ಮಪ್ರಸಾದ್ ಹೆಗ್ಡೆ  ಹಾಗೂ ಶಕುಂತಲಾ ಐಯರ್ ರವರು ದೀಪ ಬೆಳೆಗುವುದರ ಮೂಲಕ ಉದ್ಘಾಟಿಸಿದರು.ಪ್ರಮುಖರಾದ ರಾಮಕೃಷ್ಣ ಕುಲಕರ್ಣಿ ಯವರು , "ನಮೋ ಬ್ರಿಗೇಡ್"ಎಂದರೇನು ?ಇದರ ರೂಪುರೇಷೆಗಳೇನು ಎಂದು ಸವಿಸ್ತಾರವಾಗಿ ವಿವರಿಸಿದರು.
ಇದೇ ಸಮಯದಲ್ಲಿ ಬ್ರಿಗೆಡಿನ ವೆಬ್‌ಸೈಟ್, ಮಿಸ್ಡ್ ಕಾಲ್ ಸಂಖ್ಯೆ ಹಾಗೂ ಸ್ಟಿಕ್ಕ್ಕರ್ ಗಳಿಗೆ ಚಾಲನೆ ದೊರೆಯಿತು.
ಪದ್ಮಪ್ರಸಾದರು ಮಾತನ್ನಾಡುತ್ತಾ "ಆಗಸ್ಟ್ 15 1947ರಂದು ನಮಗೆ , ಸ್ವ್ವಾತಂತ್ರ್ಯ ಸಿಗಲ್ಲಿಲ್ಲ ಬದಲಾಗಿ , ಬಿಳಿ ಆಂಗ್ಲರಿಂದ ಕಪ್ಪು ಆಂಗ್ಲರಿಗೆ ಅಧಿಕಾರ ವರ್ಗಾವಣೆ ಆಯಿತು. ನಮಗೆ ಮೊದಲಬಾರಿಗೆ ಅಪ್ಪಟ ಸ್ವದೇಶಿ ನಾಯಕ ದೊರಕಿದ್ದಾನೆ. ಈಗಿನ ದೇಶದ ಸಮಸ್ಯೆಗಳಿಗೆ ಒಬ್ಬ ಸಮರ್ಥ ಪ್ರಧಾನಿ ನಮಗೆ ಬೇಕಿದೆ. ಆ ನಾಯಕಣ್ಣನ್ನು ತರುವುದು ನಮ್ಮೆಲ್ಲರ ಕರ್ತವ್ಯ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ನಿಂದಿಸುವುದರಲ್ಲಿ ಎರಡು ಮಾತಿಲ್ಲ.ಈಗ ನಾವೆಲ್ಲ ಕೈ ಜೋಡಿಸಿ ಕೆಲಸ ಮಾಡುವ ಸಮಯ ಬಂದೊದಗಿದೆ. ನಾವೆಲ್ಲ ಕೋಮುವಾದಿಗಳು ಎಂಬ ಹಣೆಪಟ್ಟಿ ಕಟ್ಟುತ್ತರೇನಾವು ವಿಚಲಿತರಾಗದೆ ,ಈ ಮೃತ್ಯುಂಜಾಯೀ ಭಾರತಕ್ಕಾಗಿ ಮೋದಿಯಂತಹ ಸಮರ್ಥ ನಾಯಕನನ್ನು ಆರಿಸಬೇಕು" ಎಂದರು.