"ಪುಸ್ತಕಗಳು ಓದಿಸಿಕೊಂಡು ಹೋಗುವ ಹಾಗೆ ಇರಬೇಕು. ಇಲ್ಲದಿದ್ದರೆ ಓದುಗರು ಲೇಖಕರನ್ನು ಓಡಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು" ಎಂದು ಮಾರ್ಮಿಕವಾಗಿ ನುಡಿದುದಲ್ಲದೆ ಪತ್ರಿಕೋದ್ಯಮದ ಕಷ್ಟ-ಸುಖಗಳನ್ನು ಮಂಡಿಸಿದರು . ಹೊಸದಿಗಂತ ಪತ್ರಿಕೆಯ ಸಂಪಾದಕರಾದ ದು.ಗು.ಲಕ್ಷ್ಮಣರ "ನೇರ ನೋಟ-೨" ಪುಸ್ತಕವನ್ನು ವಿಮರ್ಶಿಸುತ್ತಾ ಲಕ್ಷ್ಮಣರನ್ನು "ಸಮಾಜ ವಿಜ್ಞಾನಿ" ಎಂದು ಕರೆದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಸಮಯ ಪಾಲನೆ. ಈ ವಿಷಯಕ್ಕಾಗಿ ನಿರೂಪನೆ ಮಾಡಿದ ಹರ್ಷರವರಿಗೆ ಅಭಿನಂದನೆಗಳು . ಎಲ್ಲಾ ಅತಿಥಿಗಳಿಂದಲೂ ಭಾಷಣ ಮಾಡಿಸಿ ನಿಗದಿತ ಸಮಯದೊಳಗೆ ಮುಗಿಸಿದರು.
ಬಿಡುಗಡೆ ಆದ ೩ ಪುಸ್ತಕಗಳ ಬರಹಗಾರರು,ವಿಮರ್ಶಕರು ಸೇರಿದಂತೆ ಮಾಜಿ ಕಾನೂನು ಸಚಿವರು ಸುರೇಶ ಕುಮಾರ್, ಹಿರಿಯ ರಾಷ್ಟ್ರೀಯ ಸಾಹಿತಿ ಚಂದ್ರಶೇಖರ ಭಂಡಾರಿ ಯವರು ಉಪಸ್ಥಿತರಿದ್ದರು.
No comments:
Post a Comment