Sunday, May 25, 2014

ಸಾಹಿತ್ಯ ಪರಿಷತ್ತಿನಲ್ಲಿ ರಾಷ್ಟ್ರೀಯ ಸಾಹಿತ್ಯಾಸಕ್ತರಿಗೊಂದು 'ಔತಣ' ಕೂಟ


ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತಿನ ಸಭಾಮಂಟಪದಲ್ಲಿ "ಸಮೃದ್ದ ಸಾಹಿತ್ಯ" ಪ್ರಕಾಶನದ ೩ ಪುಸ್ತಕಗಳ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಾಹಿತಿಗಳಾದ ದೊಡ್ಡರಂಗೇ ಗೌಡರು
"ಪುಸ್ತಕಗಳು ಓದಿಸಿಕೊಂಡು ಹೋಗುವ ಹಾಗೆ ಇರಬೇಕು. ಇಲ್ಲದಿದ್ದರೆ ಓದುಗರು ಲೇಖಕರನ್ನು ಓಡಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು" ಎಂದು ಮಾರ್ಮಿಕವಾಗಿ ನುಡಿದುದಲ್ಲದೆ ಪತ್ರಿಕೋದ್ಯಮದ ಕಷ್ಟ-ಸುಖಗಳನ್ನು ಮಂಡಿಸಿದರು . ಹೊಸದಿಗಂತ ಪತ್ರಿಕೆಯ ಸಂಪಾದಕರಾದ ದು.ಗು.ಲಕ್ಷ್ಮಣರ "ನೇರ ನೋಟ-೨" ಪುಸ್ತಕವನ್ನು ವಿಮರ್ಶಿಸುತ್ತಾ ಲಕ್ಷ್ಮಣರನ್ನು  "ಸಮಾಜ ವಿಜ್ಞಾನಿ" ಎಂದು ಕರೆದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಸಮಯ ಪಾಲನೆ. ಈ ವಿಷಯಕ್ಕಾಗಿ ನಿರೂಪನೆ ಮಾಡಿದ ಹರ್ಷರವರಿಗೆ ಅಭಿನಂದನೆಗಳು . ಎಲ್ಲಾ ಅತಿಥಿಗಳಿಂದಲೂ ಭಾಷಣ ಮಾಡಿಸಿ ನಿಗದಿತ ಸಮಯದೊಳಗೆ  ಮುಗಿಸಿದರು. 
ಬಿಡುಗಡೆ ಆದ ೩ ಪುಸ್ತಕಗಳ ಬರಹಗಾರರು,ವಿಮರ್ಶಕರು ಸೇರಿದಂತೆ ಮಾಜಿ ಕಾನೂನು ಸಚಿವರು ಸುರೇಶ ಕುಮಾರ್, ಹಿರಿಯ ರಾಷ್ಟ್ರೀಯ ಸಾಹಿತಿ ಚಂದ್ರಶೇಖರ ಭಂಡಾರಿ ಯವರು ಉಪಸ್ಥಿತರಿದ್ದರು. 



ಮ್ಮ ವರದಿಗಾರನ ಅನಿಸಿಕೆ: ತುಂಬಾ ಒಳ್ಳೆಯ ಕಾರ್ಯಕ್ರಮ. ೩ ಪುಸ್ಥಗಳಲ್ಲಿ ಒಂದಾದ ಪರಮ ವೀರ ಚಕ್ರ ಪುರಸ್ಕೃತರ ಬಗೆಗಿನ ಪುಸ್ತಕವನ್ನು ಯಾವುದಾದರು ಶಾಲಾ ಕಾಲೇಜಿನಲ್ಲಿ ಲೋಕಾರ್ಪಣೆ ಮಾಡಿದ್ದರೆ ಚೆನ್ನಗಿರುತ್ತಿತ್ತು.  ಮೂರೂ ರಾಷ್ಟ್ರೀಯ ಕೃತಿಗಳೇ ಆದುದರಿಂದ  ರಾಷ್ಟ್ರೀಯ ಸಾಹಿತ್ಯಾಸಕ್ತರಿಗೊಂದು 'ಔತಣ' ಕೂಟ ವಾಗಿತ್ತೆಂದೇ ಹೇಳಬಹುದು 

No comments:

Post a Comment